ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -
ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -
ಹರಿಸೋಣ ಬನ್ನಿ ಮೌನ ಕ್ರಾಂತಿಯ...
ರೋಷ ತುಂಬಿದ ಪಾಪಿ ಕಂಗಳ ದೋಷ ಕರಗಲಿ -
ಮನ ಮನಗಳಲ್ಲಿ ಜಗವ ಗೆದ್ದ ಜ್ಞಾನ ಜಯಸಲಿ -
ಬೆಳಗೋಣ ಬನ್ನಿ ಮೌನ ಕ್ರಾಂತಿಯ
ವ್ಯರ್ಥವಾದ ಚುಚ್ಚು ಮಾತಿನ ಚರ್ಚೆ ನಶಿಸಲಿ -
ಕರುನಾಡ ನುಡಿ ಗುಡಿಗಳಲ್ಲಿ ಮಮತೆ ಮೆರೆಯಲಿ -
ಹಂಚೋಣ ಬನ್ನಿ ಮೌನ ಕ್ರಾಂತಿಯ.
ನಾಸ್ತಿಕನೂ ನಿಜ ನಂಬುವಂತೆ ದೈವದ ಆಸ್ತಿ ಬೆಳೆಯಲಿ -
ಮಸ್ತಕದ ಪುಟಪುಟಗಳಲ್ಲಿ ಮಾನವಿಯ ಗ್ರಂಥ ಹುಟ್ಟಲಿ -
ಕಲಿಸೋಣ ಬನ್ನಿ ಮೌನ ಕ್ರಾಂತಿಯ ...
ಯುವ ಜನತೆಯ ಹೆಗಲ ಮೇಲೆ ಭಾರತಾಂಬೆಯ ಕೈಗಳಿರಲಿ -
ಸಾಧಿಸಿ ಏರುವ ಎತ್ತರದುದ್ದಕೂ ಭರತ ಖಂಡದ ಹೆಮ್ಮೆ ಕಾಣಲಿ -
ಸಾಧಿಸೋಣ ಬನ್ನಿ ಮೌನ ಕ್ರಾಂತಿಯ...
ರಾಘವೇಂದ್ರ ಗೌಡ, ಹೊನ್ನಾವರ
ಸ. ಹಿ. ಪ್ರಾ. ಶಾಲೆ ಮಳಲಗಾಂವ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ