ವಿಷಯಕ್ಕೆ ಹೋಗಿ

ಮೌನ ಕ್ರಾಂತಿ


ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು - 

ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು - 

ಹರಿಸೋಣ ಬನ್ನಿ ಮೌನ ಕ್ರಾಂತಿಯ...


ರೋಷ ತುಂಬಿದ ಪಾಪಿ ಕಂಗಳ ದೋಷ ಕರಗಲಿ - 

ಮನ ಮನಗಳಲ್ಲಿ ಜಗವ ಗೆದ್ದ ಜ್ಞಾನ ಜಯಸಲಿ - 

ಬೆಳಗೋಣ ಬನ್ನಿ ಮೌನ ಕ್ರಾಂತಿಯ


ವ್ಯರ್ಥವಾದ ಚುಚ್ಚು ಮಾತಿನ ಚರ್ಚೆ ನಶಿಸಲಿ - 

ಕರುನಾಡ ನುಡಿ ಗುಡಿಗಳಲ್ಲಿ ಮಮತೆ ಮೆರೆಯಲಿ - 

ಹಂಚೋಣ ಬನ್ನಿ ಮೌನ ಕ್ರಾಂತಿಯ.


ನಾಸ್ತಿಕನೂ ನಿಜ ನಂಬುವಂತೆ ದೈವದ ಆಸ್ತಿ ಬೆಳೆಯಲಿ - 

ಮಸ್ತಕದ ಪುಟಪುಟಗಳಲ್ಲಿ ಮಾನವಿಯ ಗ್ರಂಥ ಹುಟ್ಟಲಿ - 

ಕಲಿಸೋಣ ಬನ್ನಿ ಮೌನ ಕ್ರಾಂತಿಯ ...


ಯುವ ಜನತೆಯ ಹೆಗಲ ಮೇಲೆ ಭಾರತಾಂಬೆಯ ಕೈಗಳಿರಲಿ - 

ಸಾಧಿಸಿ ಏರುವ ಎತ್ತರದುದ್ದಕೂ ಭರತ ಖಂಡದ ಹೆಮ್ಮೆ ಕಾಣಲಿ - 

ಸಾಧಿಸೋಣ ಬನ್ನಿ ಮೌನ ಕ್ರಾಂತಿಯ...


 ರಾಘವೇಂದ್ರ ಗೌಡ, ಹೊನ್ನಾವರ 

ಸ. ಹಿ. ಪ್ರಾ. ಶಾಲೆ ಮಳಲಗಾಂವ

ಕಾಮೆಂಟ್‌ಗಳು

Follow us