ನೀ ಜನ್ಮತಳೆದೆ ಆ ತಾಯಿ ಮಡಿಲಲ್ಲಿ
ದೈವ ಮಾತೆ ಎಂದೆ ಉಸಿರಿನ ಕೊನೆ ತನಕ
ಜೀವ ಜೀವಕೂ ಆಸರೆ ಈ ಭೂಮಿ ತಾಯಿ
ಭೂಮಾತೆಯ ಮರೆತೇ ನೀನು ಓ ಮನುಜ ||1
ನಲಿ -ಕಲಿದೆ ಜೊತೆಗೆ ಜನನಿ ಆರೈಕೆಯಲಿ
ಗುರುವೆಂದು ಪೂಜೆ ಗೈದಿಹೆ ಈ ದೇವತೆಯನ್ನು
ನಂದದಾ ವನ ಇಹುದು ಈ ಹಸಿರು ನಂದನವು
ಭೂದೇವಿ ಹಸಿರು ತೊರೆದೆ ನೀನು ಓ ಮನುಜ||2
ಆನಂದದಿ ನೀ ನಿಂತೆ ಅಮ್ಮನಾ ತೋಳಲ್ಲಿ
ಅನುದಿನವು ಕಂಡೆ ಪರಿ ಪರಿಯ ಸೊಬಗು
ವಸುಧೆಯಲಿ ಇತ್ತು ರನ್ನದಾ ಐಸಿರಿಯು
ಭೂಸಿರಿಯ ನುಂಗಿದೆ ನೀನು ಓ ಮನುಜ ||3
ಬದುಕಿನ ಆಸೆ ಅಂಗಳದಿ ಭೂ - ತಾಯಿ ಋಣವ
ಕಡೆಗಣಿಸಿ ಮೆರೆದೆ ಈ ಲೋಕದ ಪಯಣದಲಿ
ಒಳಿತನ್ನೆ ಕಾಣದಾ ಬರಡು ಹುಲು ಮಾನವನಾಗಿ
ಬದುಕಿನ ಕರ್ತವ್ಯವಾ ಮರೆತೆ ನೀನು ಓ ಮನುಜ ||4
✍️💐 ಶ್ರೀಕಾರ
ಶಿಕ್ಷಕರು, ಸ್ನೇಹಸಾಗರ ವಸತಿ ಶಾಲೆ, ಯಲ್ಲಾಪುರ
ಶಿರಸಿ ಶೈ. ಜಿಲ್ಲೆ ಉ.ಕ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ