ವಿಷಯಕ್ಕೆ ಹೋಗಿ

ವಸುಂಧರಾ


ನೀ ಜನ್ಮತಳೆದೆ ಆ ತಾಯಿ ಮಡಿಲಲ್ಲಿ

ದೈವ ಮಾತೆ ಎಂದೆ ಉಸಿರಿನ ಕೊನೆ ತನಕ

ಜೀವ ಜೀವಕೂ ಆಸರೆ ಈ ಭೂಮಿ ತಾಯಿ

ಭೂಮಾತೆಯ ಮರೆತೇ ನೀನು ಓ ಮನುಜ ||1


ನಲಿ -ಕಲಿದೆ ಜೊತೆಗೆ ಜನನಿ ಆರೈಕೆಯಲಿ

ಗುರುವೆಂದು ಪೂಜೆ ಗೈದಿಹೆ ಈ ದೇವತೆಯನ್ನು 

ನಂದದಾ ವನ ಇಹುದು ಈ ಹಸಿರು ನಂದನವು

ಭೂದೇವಿ ಹಸಿರು ತೊರೆದೆ ನೀನು ಓ ಮನುಜ||2


ಆನಂದದಿ ನೀ ನಿಂತೆ ಅಮ್ಮನಾ ತೋಳಲ್ಲಿ

ಅನುದಿನವು ಕಂಡೆ ಪರಿ ಪರಿಯ ಸೊಬಗು

ವಸುಧೆಯಲಿ ಇತ್ತು ರನ್ನದಾ ಐಸಿರಿಯು 

ಭೂಸಿರಿಯ ನುಂಗಿದೆ ನೀನು ಓ ಮನುಜ ||3


ಬದುಕಿನ ಆಸೆ ಅಂಗಳದಿ ಭೂ - ತಾಯಿ ಋಣವ

ಕಡೆಗಣಿಸಿ ಮೆರೆದೆ ಈ ಲೋಕದ ಪಯಣದಲಿ 

ಒಳಿತನ್ನೆ ಕಾಣದಾ ಬರಡು ಹುಲು ಮಾನವನಾಗಿ

ಬದುಕಿನ ಕರ್ತವ್ಯವಾ ಮರೆತೆ ನೀನು ಓ ಮನುಜ ||4


✍️💐 ಶ್ರೀಕಾರ 

ಶಿಕ್ಷಕರು, ಸ್ನೇಹಸಾಗರ ವಸತಿ ಶಾಲೆ, ಯಲ್ಲಾಪುರ

ಶಿರಸಿ ಶೈ. ಜಿಲ್ಲೆ ಉ.ಕ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us