ವಿಷಯಕ್ಕೆ ಹೋಗಿ

ಮರ


ಮರವೇ
 ನೀನು ಇಳೆಗೆ ವರವು
ಜೀವ ಜಗದ ಉಸಿರ ಸ್ವರವು

 

ನಿಂತಲ್ಲೇ ಬೇರು ಬಿಟ್ಟು

ಬೆಳೆದುದೆಲ್ಲ ನಮಗೆ ಕೊಟ್ಟು

ಬಿದ್ದರೂ ಎಷ್ಟೊಂದು ಪೆಟ್ಟು

ತೋರಲಾರೆ ಮುನಿಸು ಸಿಟ್ಟು

ಹೇಳೆ ನಿನ್ನ ಬದುಕ ಗುಟ್ಟು.....!

 

ಹೂ ಹಣ್ಣು ಹಸಿರು ತಳಿರು

ಹಾಸಿ ಹರವಿ ನೆರಳ ನವುರು

ಕಡಿದರೂನು ಮತ್ತೆ ಚಿಗುರು

ತೋರಲಾರೆ ಯಾವ ಕಸರು

ಸಹನೆ ತಾನೇ ನಿನ್ನ ಉಸಿರು...!

 

ಮಣ್ಣನುಂಡು ಹಣ್ಣನಿತ್ತು

ಪೊರೆವೆ ಜೀವ ಜಗತ್ತು

ಬಂದರೆ ನಮಗೆ ಆಪತ್ತು

ರೋಗ ಗುಣ ನಿನ್ನ ಸ್ವತ್ತು

ಕಾಪಾಡುವೆ ನಿನ್ನನ್ನಿತ್ತು...!

 

ಭೇದ ಭಾವ ನಿನ್ನೊಳಿಲ್ಲ

ಎರಡು ಬಗೆವ ನೀತಿಯಿಲ್ಲ

ನಿನ್ನ ಮುಂದೆ ಒಂದೇ ಎಲ್ಲ

ಕೊಟ್ಟು ಬಿಡುವೆ ನಿನ್ನದೆಲ್ಲ

ನಿನ್ನ ಹಾಗೆ ನಾವೇಕೆ ಇಲ್ಲ..!

 

ಮಡಿಯೆ ಮಣ್ಣಿಗೆ ಮರಳುವೆ

ಕಸುವ  ಮರಳಿ ನೀಡುವೆ

ನನ್ನಂತೆ ಬಾಳು  ಮಗುವೆ

ಮೌನದಿ ನೀ ತಿಳಿಸುವೆ

ಮತ್ತೆ ಮತ್ತೆ ಸೆಳೆಯುವೆ...!

 

 

ರೇಖಾ ಭಟ್

ಶಿಕ್ಷಕರು

 ಹಿ ಪ್ರಾ ಶಾಲೆ ಕಾನಗೋಡ, ಯಲ್ಲಾಪುರ, ಶಿರಸಿ ಶೈ ಜಿಲ್ಲೆ







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us