ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ
ದೇಶ ಕಾಯ್ವ ಧೀಮಂತ
ಓ ದೇವ ಮಾನವ ||1
ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ
ಭಾರತಾಂಬೆ ದುರ್ಗೆಗೆ
ಅರ್ಪಣೆಯ ಅರ್ಚಕ
ಸಕಲರಿಗೂ ನಿಲುಕದಾ..
ಸರ್ವ ಜೀವ ರಕ್ಷಕ ||2
ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ
ತಾಯಿ, ಜನ್ಮಭೂಮಿಗೆ
ಕರುಳ ಕುಡಿಯ ರನ್ನ
ತನು ಮನ ತ್ಯಾಗಕೆ
ನೀನೇ ಅಮರ ಭಕ್ತ ||3
ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ
ಹೆತ್ತ ತಾಯಿ ದೇವಿಗೆ
ಕುಂಕುಮದ ಅರ್ಪಣೆ
ಭಾರತಾಂಬೆ ಪಾದಕ್ಕೆ
ರಕ್ತ, ಕಾಯ ಸಿಂಚನೆ ||4
ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ
ಆ ಕಾರ್ಗೀಲ್ ಪಣವು
ಶೂರತೆಯ ಝೇಂಕಾರ
ಕಂಡು ನೀ ಮುನ್ನಡೆದೆ
ನವ ಶಕ್ತಿಯ ಉದಯ ||5
ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ
ಶತ್ರು ನಾಶ ತರ್ಪಣ
ಹಿಮ ಗಿರಿಯ ತುಂಗದಿ
ತಳ ಊರಿ ಜಯವೆಂದೆ
ತ್ರಿವರ್ಣ ಧ್ವಜ ಸ್ತಂಭಕೆ ||6
ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ
ನಾಯಕ ನಿನ್ನ ಜನ್ಮವು
ಅಮರತ್ವದ ಕಡೆಗೆ
ನಿನಗಿದೋ ಸಮ್ಮಾನ
ಜಯ ಶ್ರೀಕಾರ ವಂದನೆ || 7
ತಲೆ ಬಾಗಿ ನಮಿಪೆ
ಓ ಧೀರ ರಣ ಯೋಧ ||
ದೇಶ ಕಾಯ್ವ ಧೀಮಂತ
ಓ ದೇವ ಮಾನವ ||
✍️ ಶ್ರೀಕಾರ
ಶಿಕ್ಷಕರು ಸ್ನೇಹ ಸಾಗರ ವಸತಿ ಶಾಲೆ ಇಡಗುಂದಿ
ಯಲ್ಲಾಪುರ ಶಿರಸಿ ಶೈಕ್ಷಣಿಕ ಜಿಲ್ಲೆ ಉ.ಕ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ