ವಿಷಯಕ್ಕೆ ಹೋಗಿ

ಮಕ್ಕಳ ಪದ್ಯ ಹುಷಾರಾಗ್ರಿ...


ಅಯ್ಯೋ! ಗುಡ್ಡ ಕುಸಿದೇ ಬಿತ್ತು

ಏನ್ರಪ್ಪಾ ಪರಿಹಾರ ?

ಬೆಟ್ಟ ಕೊರೆಯೋದ ಬಿಟ್ರೆ ಸಾಕು

ಉಳಿಸಿರಿ ಪ್ರಕೃತಿ ಪರಿವಾರ


ಮಳೆ ಸ್ವಲ್ಪ ಜಾಸ್ತಿ ಆದ್ರೂ

ನೆರೆ ಬರೋದ್ಯಾಕೆ ?

ಎಲ್ಲೋ.. ಏನೋ ತಪ್ಪು

ಆಗಿರ್ಬೋದು ಜೋಕೆ


ಬೇಸಿಗೆ ಬಂದ್ರೆ ನೀರೇ ಇಲ್ಲ

ಇದ್ಯಾವ ಕಾಲ ಬಂತಪ್ಪ !

ಮಳೆ ನೀರನು ಇಂಗಿಸಲಿಲ್ಲ

ತಪ್ಪು ನಮ್ದೇ ಕಣ್ರಪ್ಪ


ಏನ್ ಬಿಸಿಲು ಏನ್ ಸೆಕೆ

ಯಾಕೆ ಹೀಂಗೆಲ್ಲ ಆಗ್ತಿದೆ ?

ಗಿಡ ನೆಡಿ  ಮರ ಉಳ್ಸಿ

ಎಲ್ಲಾ ಸರಿ ಹೋಗ್ತದೆ


ಪ್ಲಾಸ್ಟಿಕ್ ಕಸಗಳ ಕಡಿಮೆ

ಮಾಡ್ಬೇಕಿತ್ತು ಹೇಗೆ ?

'ಬಳಕೆ ಕಡಿಮೆ ಮಾಡ್ರಪ್ಪಾ'

ಕೂಗ್ತು ಮರದಿಂದ ಕಾಗೆ





ರೇಖಾ ಭಟ್

ಸಹಶಿಕ್ಷಕಿ

ಸ ಹಿ ಪ್ರಾ ಶಾಲೆ ಕಾನಗೋಡ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕವನ: ಗಣಿತದ ಗಮ್ಮತ್ತು

 ಗಣಿತ ಗಮ್ಮತ್ತಿನ ಗಣಿ    ಮೌಲ್ಯಯುತ ಮಾಣಿಕ್ಯದ ಮಣಿ ll

ಮಮತೆಯ ಮಡಿಲು: ಕವಿ ಸಾಹಿತಿಗಳ ಜೀವಾಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆ

ದಟ್ಟವಾದ ಕಾಡೊಂದರಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕೋತಿ, ಕರಡಿ ಹೀಗೆ ಹಲವಾರು ಪ್ರಾಣಿಗಳು ನೆಮ್ಮದಿಯಿಂದ ವಾಸವಾಗಿದ್ದವು. ಅಲ್ಲಿಯೇ ಸಮೀಪದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ಕಾಡಿನ ಎಲ್ಲಾ ಪ್ರಾಣಿಗಳು ಆ ನದಿಯ ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು.

ಮೌನ ಕ್ರಾಂತಿ

ಬಿಚ್ಚಿಕೊಳ್ಳಲಿ ಹೆಪ್ಪುಗಟ್ಟಿದ ದೇಶಾಭಿಮಾನದ ಅಲೆಗಳು -  ಉಕ್ಕಿ ಬರಲಿ ನಾಡಿಗಾಗಿ ನೆತ್ತರಾ ಶುಭ ಸೆಲೆಗಳು -  ಹರಿಸೋಣ ಬನ್ನಿ ಮೌನ ಕ್ರಾಂತಿಯ...

Follow us