ಮೋಡಗಳಾಚೆ ನೀಲಿಯ ರಂಗು
ತೆಪ್ಪದ ರಥವೇರಿ ಹೊಂಟ ಗುಂಗು
ಹಾಲ್ನೋರೆಯ ಧಾರೆಯಲಿ ಮಿಂದು
ಮೈತಳೆದ ಮುಗಿಲಿನ ಮಂಜು
ಎತ್ತಸಾಗಿದರೂ ಚಿತ್ತನಲಿಯುವುದು
ತಾರೆಗಳ ಸಂಭ್ರಮದಲ್ಲ
ಮೌನದ ಮೆರವಣಿಗೆ ಸಾಗಿಹುದು
ನೇಸರನ ಹೊಂಗಿರಣದ ಛಾಯೆಯಲ್ಲಿ
ನಾನು ತಾನೆಂಬ ಮೋಹ ಕಳಚುತ
ಇಹ-ಪರಲೋಕದ ಗಣನೆಗೆ
ಮೌನದ ಕವಚ ತೊಡಿಸುತ
ಸದ್ದಿಲ್ಲದೆ ಸಾಗುವ ಉಸಿರಿನಂತೆ
ಎಲ್ಲೋ ಹುಡುಕುವ ಸಂಭ್ರಮಕ್ಕಿಂತ
ಕಣ್ಣರಳಿಸಿ ಕಂಡಷ್ಟು ಸೌಖ್ಯವಿದೆ
ಮತ್ತಾವ ಭಾಷೆಯ ಗೊಂದಲಕ್ಕಿಂತ
ಅಚ್ಚ ಕನ್ನಡದ ತೊದಲು ನುಡಿಬೇಕಿದೆ
ಅಬ್ಬರಿಸುವ ಪರಭಾಷೆಯ ಪಟಾಕಿಗಳು
ನಿದ್ದೆಗೆಡಿಸಿ,ಬಂಧಿಸಿ ನಸುನಕ್ಕಿವೆ
ಕನ್ನಡ ಕಸ್ತೂರಿಯ ಪರಿಮಳವು
ಮೌನದಂಚಿಗೆ ಜಾರದಂತೆ…
ಕವಿಯತ್ರಿ:
ಶಿವಲೀಲಾ ಹುಣಸಗಿ ಕವಯಿತ್ರಿ
ಯಲ್ಲಾಪುರ.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ