
ದೇವರು ಎಂಬುದು ಕೇವಲ ನಂಬಿಕೆಯೆಂದರು….
ಸಾಕ್ಷಿಯೇ ನೀನಿರುವಾಗ ಕೇವಲ ನಂಬಿಕೆ ಮಾತ್ರ ಹೇಗಾದೀತು ಅಮ್ಮಾ…?
ಸ್ವಾರ್ಥ ಪ್ರೀತಿಯೇ ತುಂಬಿದ ಜಗದಲ್ಲಿ ನೀ ಮಾತ್ರ ಬೇರೆಯಾದೆಯಲ್ಲ..
ಸುಳ್ಳಿನ ಪ್ರಪಂಚಕ್ಕೆ ನೀ ಮಾತ್ರ ಸತ್ಯವಾದೆಯಲ್ಲ…
ನಿನ್ನ ಪ್ರಪಂಚದಲ್ಲಿ ನಿನ್ನನ್ನೇ ಮರೆಯಾಗಿಸಿ
ನಿನ್ನವರಿಗಾಗಿ ಸವೆಸಿದೆಯಲ್ಲ…..
ಬಿಳಿ ಹಾಳೆಯಂಥ ಬದುಕಿನಲ್ಲಿ ಬಣ್ಣಗಳಿಂದ
ಸಿಂಗರಿಸಿ ಚಿತ್ತಾರ ಮಾಡಿದೆಯಲ್ಲ….
ಎಷ್ಟು ಗೋಗರೆದರೂ ಬರದ ದೇವರಿರುವಾಗ
ಕರೆಯದೇ ಓಡೋಡಿ ಬರುವ ನೀನು….
ನೀ ದೇವರಲ್ಲದೇ ಮತ್ತಿನ್ನೇನು ಅಮ್ಮಾ….?
ರೇಖಾ ಶೇಖರ ನಾಯ್ಕ
ಸಹಶಿಕ್ಷಕರು
ಸ. ಹಿ. ಪ್ರಾ.ಶಾಲೆ ತೊಳಗೋಡ್
ಯಲ್ಲಾಪುರ,ಶಿರಸಿ ಶೈ.ಜಿಲ್ಲೆ
●9535699974

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ